Friday, December 5, 2008

ನಮ್ಮೂರು.........ನಮ್ಮ ರಾಜ್ಯ... ನಮ್ಮ ಜನಗಳು... ಪ್ರಸಿದ್ಧ ವ್ಯಕ್ತಿ..........

ಕರ್ನಾಟಕ, ದಕ್ಷಿಣ ಭಾರತದಲ್ಲಿರುವ ಒಂದು ರಾಜ್ಯ. ಇದರ ಹಿಂದಿನ ಹೆಸರು ಮೈಸೂರು ಸಂಸ್ಥಾನ.ಸುಮರು ೨೦೦೦ ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದೆ.ಕರ್ನಾಟಕದ ರಾಜಧಾನಿ ಬೆಂಗಳೂರು.ಇದಕ್ಕೆ ಬಹಳ ಅನ್ವರ್ಥ ನಾಮಗಳಿವೆ. ಉದಾ: ಉದ್ಯಾನ ನಗರ,ಭಾರತದ ಸಿಲಿಕಾನ್ ಕಣಿವೆ ಇತ್ಯಾದಿ.
ಕರ್ನಾಟಕದ ರಾಜ್ಯ ಭಾಷೆ ಕನ್ನಡ.ಕರ್ನಾಟಕವು,ಪುರಾತನ ಭಾರತದ ಅನೇಕ ಪ್ರಸಿದ್ಧ ರಾಜ ವಂಶಸ್ಥರ ತವರೂರಾಗಿತ್ತು.ಕರ್ನಾಟಕವನ್ನು ಆಳಿದ ಪ್ರಮುಖ ರಾಜ ವಂಶಸ್ಥರೆಂದರೆ,ಕದಂಬರು,ಗಂಗರು,ಚಾಲುಕ್ಯರು,ರಾಷ್ತ್ರಕೂಟರು,ಹೊಯ್ಸಳರು,ವಿಜಯನಗರದ ಅರಸರು,ಬಹಮನಿ ಸುಲ್ತಾನರು,ಬಿಜಪುರ ಸುಲ್ತಾನರು,ಮೈಸೂರು ಅರಸರು.
ಭಾರತದ ಪ್ರಸಿದ್ಢ ಶಾಸ್ತ್ರೀಯ ಸಂಗೀತ ಪ್ರಕಾರಗಳಾದ ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತಕ್ಕೆ ಕರ್ನಾಟಕದ ಕೊಡುಗೆ ಅಪಾರ.ಕನ್ನಡ ಸಾಹಿತ್ಯಕ್ಕೆ, ಭಾರತದಲ್ಲಿ ಅತೀ ಹೆಚ್ಚು ಜ್ಣಾನಪೀಟ ಪ್ರಶಸ್ತಿಗಳನ್ನು ಪಡೆದ ಗೌರವವಿದೆ.
ಕರ್ನಾಟಕದಲ್ಲಿ ಅನೇಕ ಪ್ರಸಿದ್ಧ ಪ್ರೇಕ್ಶಣೀಯ ಸ್ಥಳಗಳಿವೆ.ಅವುಗಳಲ್ಲಿ ಪ್ರಮುಖವೆಂದರೆ,ಹಂಪೆ,ಜೋಗ ಜಲಪಾತ,ಗೋಕರ್ಣ,ಹಳೇಬೀಡು,ಬೇಲೂರು,ಸೋಮನಾಥ ಪುರ,ಬಾದಾಮಿ,ಐಹೊಳೆ,ಬಿಜಾಪುರದ ಗೋಲ್ ಗುಂಬಸ್,ಶ್ರವಣ ಬೆಳಗೊಳ,ಪಶ್ಚಿಮ ಘಟ್ಟದ ಕಾಡುಗಳು,ಮೈಸೂರು,ಇತ್ಯಾದಿ..ನೋಡಲು ನಯನ ಮನೋಹರವಾಗಿದೆ.ಇವೆಲ್ಲವು ಮಾನವ ಮತ್ತು ನಿಸರ್ಗ ನಿರ್ಮಿತ ಅಮೂಲ್ಯ ಆಸ್ತಿಗಳಾಗಿವೆ.
ಬೆಂಗಳೂರು, ಭಾರತದ ಸಿಲಿಕಾನ್ ಕಣಿವೆ(ಸಾಫ್ಟ್ ವೇರ್ ಉದ್ಯಮದ ರಾಜಧಾನಿ) ಎಂದು ಪ್ರಖ್ಯಾತವಾಗಿದೆ. ಭಾರತದ ಐಟಿ ಕ್ರಾಂತಿಗೆ ಕಾರಣರಾದ,ಇನ್ಫ಼ೊಸಿಸ್ ಸಂಸ್ಥೆಯ ನಿರ್ಮಾತ್ರುಗಳಾದ ನಾರಯಣ ಮೂರ್ತಿ ನಮ್ಮಕನ್ನಡಿಗರು ಎನ್ನುವುದು ನಮಗೆಲ್ಲಾ ಹೆಮ್ಮೆಯ ವಿಷಯ.ವಿಶ್ವದ ಅನೇಕ ಪ್ರಸಿದ್ಧ ಕಂಪನಿಗಳು,ಬೆಂಗಳೂರಿನಲ್ಲಿ ತಮ್ಮ ಕಛೇರಿಗಳನ್ನು ಹೊಂದಿವೆ. ಕ್ರೀಡಾಕ್ಶೇತ್ರಕ್ಕೆ ಕರ್ನಾಟಕದ ಕೊಡುಗೆ ಅಪಾರ.
ಭಾರತದ ಕ್ರೀಡಾಕ್ಶೇತ್ರಕ್ಕೆ ಕರ್ನಾಟಕದ ಕೊಡುಗೆಯಲ್ಲಿ ಪ್ರಮುಖರೆಂದರೆ ಪ್ರಕಾಶ್ ಪಡುಕೋಣೆ,ಪಂಕಜ್ ಅಡ್ವಾಣಿ,ಅನಿಲ್ ಕುಂಬ್ಳೆ,ರಾಹುಲ್ ದ್ರಾವಿಡ್,ಅಶ್ವಿನಿ ನಾಚಪ್ಪ,ಮುಂತಾದವರು.. !!
ಇಷ್ಟೆಲ್ಲಾ ಪರಂಪರೆ, ಪ್ರಸಿದ್ಧಿ, ಸಂಸ್ಕೃತಿ ಇರುವ ಕರ್ನಾಟಕದಲ್ಲಿ ಜನಿಸಿರುವ ನಾವು ನಿಜಕ್ಕೂ ಧನ್ಯ.. ಧನ್ಯ !!!
"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣನ್ನು ಮೆಟ್ಟಬೇಕು..!!"
ಅಂತ ನಮ್ಮ ಸಂಗೀತ ಬ್ರಹ್ಮ "ಹಂಸಲೇಖ" ರಚಿಸಿರುವ ಮತ್ತುನಮ್ಮ ಕನ್ನಡ ಕಂಠೀರವ, ಪದ್ಮಭೂಷಣ, ಗಾನ ಗಂಧರ್ವ, "ಡಾ ರಾಜಕುಮಾರ್" ಹಾಡಿರುವ ಗೀತೆ ನಿಜಕ್ಕೂ ಸತ್ಯ ಮತ್ತು ನಿತ್ಯ ...!
ಕನ್ನಡವೇ ಸತ್ಯ ...ಕನ್ನಡವೇ ನಿತ್ಯ !!!

No comments: